ಕಾಂಗ್ರೆಸ್ ಕಾರ್ಯಕರ್ತೆಯ ಉಡಾಫೆ ಮಾತು ಕೇಳಿ ಕೆರಳುವ ಸ್ಥಳೀಯರೊಬ್ಬರು, ಮಳೆಯಿಂದ ತಮ್ಮ ಮನೆ ಬಳಿ ಆಗಿರುವ ಅಧ್ವಾನ ನೋಡಲು ಅವರನ್ನು ಕರೆಯುತ್ತಾರೆ. ಆದರೆ ಅದುವರೆಗೆ ಸಚಿವರನ್ನು ವಹಿಸಿಕೊಂಡು ದೊಡ್ಡ ದೊಡ್ಡ ಮಾತಾಡುತ್ತಿದ್ದ ಕಾರ್ಯಕರ್ತೆ ಹೋಗಲು ನಿರಾಕರಿಸುತ್ತಾರೆ. ಆಕೆಯ ನಿರಾಕರಣೆಯಿಂದ ವ್ಯಗ್ರರಾಗುವ ಸ್ಥಳೀಯ ಏರಿದ ಧ್ವನಿಯಲ್ಲಿ ಮಾತಾಡತೊಡಗಿದಾಗ, ಅವರ ಜೊತೆಗಿದ್ದ ಸಚಿವನ ಕಡೆಯವರು ಕಾರ್ಯಕರ್ತೆಯನನ್ನು ಅಲ್ಲಿಂದ ಕರೆದೊಯ್ಯುತ್ತಾರೆ.