ಮೃತ ಯಶ್ ಅಭಿಮಾನಿಗಳು ತಮ್ಮ ತಮ್ಮ ಕುಟುಂಬಗಳ ಆದಾಯದ ಏಕೈಕ ಮೂಲವಾಗಿದ್ದರು. ಅವರಿಂದಲೇ ಮನೆ ನಡೆಯುತ್ತಿತ್ತು ಅಂತ ಮೂರು ಕುಟುಂಬದ ಸದಸ್ಯರು ಹೇಳಿದ್ದಾರೆ. ನಟ ಯಶ್ ಅವರಲ್ಲದೆ, ಕರ್ನಾಟಕ ಸರ್ಕಾರ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಮತ್ತು ಕೆಲ ಸಂಘಸಂಸ್ಥೆಗಳು ಕುಟುಂಬಗಳಿಗೆ ಆಸರೆಯಾಗಿ ನಿಂತಿರುವುದು ಅಭಿನಂದನೀಯ.