ಕಬ್ಬು ಅರೆದು ಹಾಲು ತೆಗೆದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇದೇ ಜನವರಿ‌ 12 ರಂದು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಹೋಗುತ್ತಿದ್ದರು. ರಾಯಚೂರು-ಮಂತ್ರಾಲಯ ಮಾರ್ಗ ಮಧ್ಯೆ ಕಬ್ಬಿನ ಹಾಲಿನ ಅಂಗಡಿ ಬಳಿ ಕಾರು ನಿಲ್ಲಿಸಿದ್ದಾರೆ. ಬಳಿಕ ಅಂಗಡಿಯಲ್ಲಿ ಖುದ್ದು ತಾವೇ ಮಷಿನ್​ಗೆ ಕಬ್ಬು ಹಾಕಿ, ಹಾಲು ತೆಗೆದಿದ್ದಾರೆ.