ಟಿ ನರಸೀಪುರ ತಾಲ್ಲೂಕಿನ ಕಾವೇರಿಪುರ ಮೂಡಲಹುಂಡಿ ಗ್ರಾಮವನ್ನು ಹೊಕ್ಕಿರುವ ಈ ಚಿರತೆ ಎರಡು ಮೇಕೆಗಳನ್ನು ಕೊಂದು ತಿಂದಿದೆ. ಬಳಿಕ ಊರ ಹೊರವಲಯದಲ್ಲಿರುವ ಕಾಲುವೆಯೊಂದರ ಬಳಿ ಅದು ಓಡಾಡಿಕೊಂಡಿದ್ದಾಗ ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್ ಫೋನಲ್ಲಿ ಅದರ ಚಲನವಲನಗಳನ್ನು ಸೆರೆಹಿಡಿದಿದ್ದಾರೆ.