ಯತ್ನಾಳ್ ತಂಡದ ಸದಸ್ಯರಿಂದ ದೇವಸ್ಥಾನದಲ್ಲಿ ಪೂಜೆ

ಬಸನಗೌಡ ಯತ್ನಾಳ್ ಜಾಗೃತಿ ಅಭಿಯಾನ ಆರಂಭಿಸುವ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತೆರಡು ತಂಡಗಳನ್ನು ರಚಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯ ಇತರ ನಾಯಕರು ಪ್ರತ್ಯೇಕ ಹೋರಾಟ ನಡೆಸುವ ಬದಲು ಯತ್ನಾಳ್ ಅವರೊಂದಿಗೆ ಕೈ ಜೋಡಿಸಬೇಕಿತ್ತೆಂದು ಪಕ್ಷದ ನಾಯಕರೇ ಹೇಳುತ್ತಿದ್ದಾರೆ.