ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಅಂತ ಮಹಾರಾಷ್ಟ್ರದ ನಾಯಕರು ದಶಕಗಳಿಂದ ಹೇಳುತ್ತಾ ಬಂದಿದ್ದಾರೆ ಅವರ ಪಾಲಿಗೆ ಹೊಸ ಸೇರ್ಪಡೆ ಉದ್ಧವ್ ಠಾಕ್ರೆ ಶಿವಸೇನಾ ಬಣದ ಶಾಸಕ ಆದಿತ್ಯ ಠಾಕ್ರೆ. ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ದಯನೀಯ ಸೋಲು ಅನುಭವಿಸಿದ ಠಾಕ್ರೆಗಳಿಗೆ ಸುದ್ದಿಯಲ್ಲಿರುವ ತವಕ. ಹಾಗಾಗೇ ಠಾಕ್ರೆ ಜ್ಯೂನಿಯರ್ ಬೆಳಗಾವಿ ವಿಷಯ ಮಾತಾಡುತ್ತಿದ್ದಾರೆ.