ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್-ಇಬ್ಬರೂ ದೊಡ್ಡ ದೊಡ್ಡ ಆರೋಪ ಮಾಡುತ್ತಾರೆ, ಸಾಬೀತು ಮಾಡಿ ಅಂದಾಗ ಪಲಾಯನವಾದಕ್ಕೆ ಶರಣಾಗುತ್ತಾರೆ. ಕುಮಾರಸ್ವಾಮಿಯವರ ಇತ್ತೀಚಿನ ಪೆನ್ ಡ್ರೈವ್ ಪ್ರಕರಣ ಕನ್ನಡಿಗರ ಸ್ಮೃತಿಪಟಲದಲ್ಲಿ ಇನ್ನೂ ಹಸಿರಾಗಿದೆ. ಯತ್ನಾಳ್ ಅವರು ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಪದೇಪದೆ ಆರೋಪ ಮಾಡುತ್ತಾರೆ ಯಾವುದನ್ನೂ ಸಾಬೀತು ಮಾಡಲ್ಲ.