ರಜತ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೂ ಮಾತಿನ ಮೂಲಕ ಎಲ್ಲರನ್ನೂ ಕೆಣಕುತ್ತಿದ್ದಾರೆ. ಈಗ ಅವರಿಗೆ ಉಗ್ರಂ ಮಂಜು ಟಾರ್ಗೆಟ್ ಆಗಿದ್ದಾರೆ. ಮಂಜುಗೆ ರೋಗಿಷ್ಟ ಎಂದು ರಜತ್ ಹೇಳಿದ್ದಾರೆ. ನವೆಂಬರ್ 28ರ ಸಂಚಿಕೆಯಲ್ಲಿ ಈ ವಿಷಯ ಪ್ರಸಾರ ಆಗಲಿದೆ. ‘ಕಲರ್ಸ್ ಕನ್ನಡ’ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ರಜತ್ಗೆ ವಾರಾಂತ್ಯದಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಳ್ಳಬಹುದು.