ಬಿಜೆಪಿ ನಾಯಕ ಸಿಟಿ ರವಿ

ಹರೀಶ್ ಇಂಜಾಡಿಯನ್ನು ನೇಮಕ ಮಾಡಿದ್ದಕ್ಕೆ ತನ್ನದೇನೂ ಅಭ್ಯಂತರವಿಲ್ಲ ಎನ್ನುವಂತಿದೆ ರವಿಯವರ ಮಾತಿನ ಧಾಟಿ. ಅವನೊಂದು ವೇಳೆ ರೌಡಿಶೀಟರ್ ಆಗಿದ್ದರೆ ಜನ ಛೀಮಾರಿ ಹಾಕುತ್ತಾರೆ ಎನ್ನುವ ರವಿಗೆ ಕುಕ್ಕೆ ಗ್ರಾಮಸ್ಥರು ಹರೀಶ್ ಆಯ್ಕೆಗೆ ತೀವ್ರ ಸ್ವರೂಪದ ವಿರೋಧ ವ್ಯಕ್ತಪಡಿಸಿರುವುದು ಗೊತ್ತಿಲ್ಲವೇ? ಮೇಲಾಗಿ ಹರೀಶ್ ಕಾಂಗ್ರೆಸ್ ಪಕ್ಷದವರು ಮತ್ತು ಅವರ ಆಯ್ಕೆಗೆ ಶಿಫಾರಸ್ಸು ಮಾಡಿದ್ದು ಸಚಿವ ದಿನೇಶ್ ಗುಂಡೂರಾವ್.