ಪತ್ರದ ಪ್ರತಿಯೊಂದನ್ನು ಹಿಡಿದು ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿದ ಹಿರಿಯ ಮುತ್ಸದ್ದಿ ತಾವು ಕಾವೇರಿ ಮಾತ್ರವಲ್ಲ ಮಹಾದಾಯಿ ನೀರಿಗಾಗಿ ಸಂಸತ್ತಿನ ಒಳಗೆ ಮತ್ತು ಹೊರಗಡೆ ನಡೆಸಿದ ಹೋರಾಟವನ್ನು ಪತ್ರಕರ್ತರಿಗೆ ಹೇಳುವಾಗ ತೀವ್ರ ಭಾವುಕರಾದರು. ಜೆಡಿಎಸ್ ಪಕ್ಷದ ಉದ್ದೇಶ ಅಧಿಕಾರಕ್ಕೆ ಬರೋದು, ಸರ್ಕಾರ ರಚಿಸೋದು ಅಲ್ಲ ಎಂದು ಅವರು ಹೇಳಿದರು.