ಮಹಾರಥೋತ್ಸವದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯದುವೀರ್, ಕಾರ್ಯಕ್ರಮಗಳೆಲ್ಲ ಒಂದೊಂದಾಗಿ ನೆರವೇರುತ್ತಿವೆ, ಅಮ್ಮನವರ ದರ್ಶನಕ್ಕಾಗಿ ಏರ್ಪಾಟು ಮಾಡಲಾಗಿದೆ. ರಾಜ್ಯ ಮತ್ತು ದೇಶದ ಸುಭಿಕ್ಷೆ, ಉತ್ತಮ ಮಳೆ ಬೆಳೆ ಹಾಗೂ ಅಭಿವೃದ್ಧಿಗಾಗಿ ಅಮ್ಮನವರನ್ನು ಬೇಡಿಕೊಂಡಿದ್ದೇನೆ ಎಂದು ಹೇಳಿದರು.