ಶಶಿಕಲಾ-ಉಪ ತಹಸೀಲ್ದಾರ್

ಕೆಲಸ ಮಾಡಿಕೊಳ್ಳುವ ಜನ ಟೇಬಲ್ ಮೇಲೆ ಇಡುವ ಲಂಚದ ಹಣವನ್ನು ಟಿವಿ9 ಕನ್ನಡ ವಾಹಿನಿಯ ರಾಯಚೂರು ವರದಿಗಾರ ಕಿಟಕಿಯಿಂದ ತಮ್ಮ ಕೆಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಂತರ, ಅವರು ಮೇಡಂ ಕೋಣೆಗೆ ಹೋಗಿ ಹಣದ ಬಗ್ಗೆ ಪ್ರಶ್ನಿಸಿದಾಗ, ನಾನದನ್ನು ಮುಟ್ಟಿದ್ದೀನಾ? ಅಂತ ಅಮಾಯಕತೆಯೊಂದಿಗೆ ದಾರ್ಷ್ಟ್ಯತೆ ಪ್ರದರ್ಶಿಸುತ್ತಾರೆ.