ಧ್ರುವ ಸರ್ಜಾ ಅವರಿಗೆ ‘ತತ್ಸಮ ತದ್ಭವ’ ಟ್ರೇಲರ್ ಇಷ್ಟ ಆಗಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಸೆಪ್ಟೆಂಬರ್ 15ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಸಸ್ಪೆನ್ಸ್, ಕ್ರೈಮ್, ಥ್ರಿಲ್ಲರ್ ಮುಂತಾದ ಅಂಶಗಳು ಈ ಸಿನಿಮಾದ ಟ್ರೇಲರ್ನಲ್ಲಿ ಇದೆ. ಎಲ್ಲರೂ ಇದನ್ನು ಟ್ರೇಲರ್ ರೀತಿ ನೋಡಿದರು. ಆದರೆ ನನಗೆ ಇದರಲ್ಲಿನ ಒಂದು ಅಂಶ ಪರ್ಸನಲ್ ಆಗಿ ಕಲೆಕ್ಟ್ ಆಯ್ತು. ಮೈ ಹಸ್ಬೆಂಡ್ ಈಸ್ ಮಿಸ್ಸಿಂಗ್ ಅಂತ ಮೊದಲ ಶಾಟ್ನಲ್ಲೇ ಅತ್ತಿಗೆ ಹೇಳುತ್ತಾರೆ. ನಿಜ ಹೇಳಬೇಕು ಎಂದರೆ ಈ ಕಾರ್ಯಕ್ರಮದಲ್ಲಿ ನನ್ನ ಅಣ್ಣ ಮಿಸ್ಸಿಂಗ್. ನಿರ್ದೇಶಕ ವಿಶಾಲ್ ಆತ್ರೇಯಾ, ನಿರ್ಮಾಪಕ ಪನ್ನಗ ಭರಣ, ನಟ ಪ್ರಜ್ವಲ್ ದೇವರಾಜ್ ಸೇರಿದಂತೆ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ಪ್ರಜ್ವಲ್ ಅವರು ತುಂಬ ಚೆನ್ನಾಗಿ ಕಾಣಿಸುತ್ತಿದ್ದಾರೆ. ಅತ್ತಿಗೆಯದ್ದು ಇದು ಕಮ್ಬ್ಯಾಕ್ ಅಲ್ಲ. ಅವರು ಯಾವಾಗಲೂ ಇಲ್ಲಿಯೇ ಇದ್ದರು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.