ಧ್ರುವ ಸರ್ಜಾಗೆ ಇಷ್ಟ ಆಯ್ತ ‘ತತ್ಸಮ ತದ್ಭವ’ ಟ್ರೇಲರ್​

ಧ್ರುವ ಸರ್ಜಾ ಅವರಿಗೆ ‘ತತ್ಸಮ ತದ್ಭವ’ ಟ್ರೇಲರ್​ ಇಷ್ಟ ಆಗಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಸೆಪ್ಟೆಂಬರ್​ 15ರಂದು ಈ ಸಿನಿಮಾ ರಿಲೀಸ್​ ಆಗುತ್ತಿದೆ. ಸಸ್ಪೆನ್ಸ್​, ಕ್ರೈಮ್​, ಥ್ರಿಲ್ಲರ್​ ಮುಂತಾದ ಅಂಶಗಳು ಈ ಸಿನಿಮಾದ ಟ್ರೇಲರ್​ನಲ್ಲಿ ಇದೆ. ಎಲ್ಲರೂ ಇದನ್ನು ಟ್ರೇಲರ್​ ರೀತಿ ನೋಡಿದರು. ಆದರೆ ನನಗೆ ಇದರಲ್ಲಿನ ಒಂದು ಅಂಶ ಪರ್ಸನಲ್​ ಆಗಿ ಕಲೆಕ್ಟ್​ ಆಯ್ತು. ಮೈ ಹಸ್ಬೆಂಡ್​ ಈಸ್​ ಮಿಸ್ಸಿಂಗ್​ ಅಂತ ಮೊದಲ ಶಾಟ್​ನಲ್ಲೇ ಅತ್ತಿಗೆ ಹೇಳುತ್ತಾರೆ. ನಿಜ ಹೇಳಬೇಕು ಎಂದರೆ ಈ ಕಾರ್ಯಕ್ರಮದಲ್ಲಿ ನನ್ನ ಅಣ್ಣ ಮಿಸ್ಸಿಂಗ್​. ನಿರ್ದೇಶಕ ವಿಶಾಲ್​ ಆತ್ರೇಯಾ, ನಿರ್ಮಾಪಕ ಪನ್ನಗ ಭರಣ, ನಟ ಪ್ರಜ್ವಲ್​ ದೇವರಾಜ್​ ಸೇರಿದಂತೆ ಇಡೀ ತಂಡಕ್ಕೆ ಆಲ್​ ದಿ ಬೆಸ್ಟ್​. ಪ್ರಜ್ವಲ್​ ಅವರು ತುಂಬ ಚೆನ್ನಾಗಿ ಕಾಣಿಸುತ್ತಿದ್ದಾರೆ. ಅತ್ತಿಗೆಯದ್ದು ಇದು ಕಮ್​ಬ್ಯಾಕ್​ ಅಲ್ಲ. ಅವರು ಯಾವಾಗಲೂ ಇಲ್ಲಿಯೇ ಇದ್ದರು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.