ಮಳೆಯ ಮಾತು ಒಂದೆಡೆಯಿರಲಿ, ಕನಿಷ್ಟ ಮಾರ್ಕೆಟ್ ತಲುಪುವ ರಸ್ತೆಗಳಾದರೂ ಒಪ್ಪವಾಗಿದ್ದರೆ ಜನ ಕೊಡೆ ಹಿಡಿದು, ಜರ್ಕಿನ್ ಧರಿಸಿ, ರೇನ್ ಕೋಟ್ ಗಳನ್ನು ಮೇಮೇಲೆ ಎಳೆದುಕೊಂಡು ಬಂದಾರು. ಬೆಂಗಳೂರು ನಿವಾಸಿಗಳಿಗೆ ಅದೂ ನಸೀಬಿಲ್ಲ. ರಸ್ತೆಗಳು ಅಧ್ವಾನ ಎದ್ದುಹೋಗಿವೆ ಅಂತ ಹೇಳಿದರೆ ಅದು ಅಂಟರ್ಸ್ಟೇಟ್ಮೆಂಟ್! ವ್ಯಾಪಾರಿಗಳು ಘನಸರ್ಕಾರವನ್ನು ಶಪಿಸದೆ ಏನು ಮಾಡುತ್ತಾರೆ?