ಕಡೂರು ತಾಲ್ಲೂಕಿನಲ್ಲಿರುವ ಶಿವಗಂಗಾ ಗಿರಿಯಲ್ಲಿ ಚಿರತೆ ಕಾಣಿಸಿರೋದು ಇದು ಮೊದಲ ಸಲವೇನಲ್ಲ, ಇದಕ್ಕೂ ಮೊದಲು ಸ್ಥಳೀಯರು ವನ್ಯಜೀವಿಯನ್ನು ನೋಡಿದ್ದಾರೆ. ಶಿವಗಂಗಾ ಗಿರಿ ಶ್ರೀ ಕ್ಷೇತ್ರವೂ ಆಗಿರುವುದರಿಂದ ಭಕ್ತರ ದಂಡು ನಿರಂತರವಾಗಿ ಆಗಮಿಸುತ್ತಿರುತ್ತದೆ. ಇದೊಂದು ಏಕಶಿಲಾ ಬೆಟ್ಟ ಮತ್ತು ಬೆಟ್ಟದ ಸುತ್ತ ಬಯಲು ಪ್ರದೇಶವಿದೆ. ಬೆಟ್ಟದ ಮೇಲೆ ಹೋಗಲು ಉತ್ತಮವಾದ ರಸ್ತೆ ಇದೆ ಮತ್ತು ಮೆಟ್ಟಿಲುಗಳು ಸಹ ಇವೆ.