ಬಿಎಸ್ ಯಡಿಯೂರಪ್ಪ, ಹಿರಿಯ ಬಿಜೆಪಿ ನಾಯಕ

ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 14 ರಂದು ಮಂಗಳೂರಲ್ಲಿ ರೋಡ್ ಶೋ ಮಾಡಲಿದ್ದಾರೆ, ಬೆಂಗಳೂರಲ್ಲೂ ಮಾಡಬಹುದು ಎಂದ ಯಡಿಯೂರಪ್ಪ ಬರ ಪರಿಹಾರ ನಿಧಿಯ ಬಗ್ಗೆ ಮಾತಾಡಲು ಇದು ಸೂಕ್ತ ಸಮಯವಲ್ಲ, ಚುನಾವಣೆಯ ನಂತರ ಮಾತಾಡುವುದಾಗಿ ಹೇಳಿದರು. 28 ಸ್ಥಾನ ಗೆಲ್ಲೋದು ಕನಸು ಅಂತ ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಅದನ್ನೇ ಹೇಳುತ್ತಾರೆ, ಬೇರೇನಿದೆ ಅವರಲ್ಲಿ ಹೇಳೋದಿಕ್ಕೆ ಎಂದರು.