ಬೆಳಗಾವಿ ವಿಧಾನಸಭಾ ಆಧಿವೇಶನಕ್ಕೆ ಕೇವಲ ಒಂದು ವಾರ ಬಾಕಿಯಿರುವಾಗ ಕಾಂಗ್ರೆಸ್ ಸರ್ಕಾರ ಡಿಕೆ ಶಿವಕುಮಾರ್ ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಯನ್ನು ಹಿಂಪಡೆದಿದ್ದು ನಿಸ್ಸಂದೇಹವಾಗಿ ವಿರೋದ ಪಕ್ಷಗಳ ಕೈಗೆ ಒಂದು ಅಸ್ತ್ರ ನೀಡಿದಂತಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಲವಾರು ಅಂಶಗಳನ್ನು ಪಟ್ಟಿ ಮಾಡಿಟ್ಟುಕೊಂಡಿದ್ದಾರೆ, ಆ ಪಟ್ಟಿಗೆ ಸರ್ಕಾರದ ಈ ನಿರ್ಧಾರ ಪ್ರಬಲ ಅಂಶವಾಗಿ ಸೇರ್ಪಡೆಯಾಗಲಿದೆ.