ಎಂಪಿ ರೇಣುಕಾಚಾರ್ಯ ಮತ್ತು ಇತರ ನಾಯಕರು

ರೇಣುಕಾಚಾರ್ಯ ಜೊತೆ ಮಾತುಕತೆ ನಡೆಸಿ ಸಂಧಾನಕ್ಕೆಂದು ಬಂದಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಮಾಜಿ ಶಾಸಕನ ಮನವೊಲಿಸಲು ವಿಫಲರಾಗಿ ನಿರಾಶೆಯಿಂದ ವಾಪಸ್ಸು ಹೋಗಬೇಕಾಯಿತು. ದಾವಣಗೆರೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿಯವರಿಗೆ ನೀಡಿರುವ ಟಿಕೆಟ್ ಕ್ಯಾನ್ಸಲ್ ಮಾಡಿ ತನಗೆ ನೀಡಬೇಕೆಂದು ರೇಣುಕಾಚಾರ್ಯ ಪಟ್ಟು ಹಿಡಿದಿದ್ದಾರೆ.