ಹಳೆಯ ಕಾರುಗಳು ಒಂದೂವರೆ ಲಕ್ಷ ಕಿಮೀಗಳಿಗಿಂತ ಜಾಸ್ತಿ ಓಡಿದ್ದರಿಂದ ಅವಧಿ ಮುಗಿದಿತ್ತು ಮತ್ತು ವಾಹನ ಖರೀದಿಗಾಗಿ ಹಣವನ್ನು ಪ್ರತ್ಯೇಕವಾಗಿ ತೆಗೆದಿರಿಸಲಾಗುತ್ತದಂತೆ ಹಾಗೂ ಅದನ್ನು ಬೇರೆ ಉದ್ದೇಶಗಳಿಗೆ ಬಳಸಲು ಆಗೋದಿಲ್ವಂತೆ. ಹೇಗಿದೆ ನೋಡಿ ತರ್ಕ! ಆ ಹಣವನ್ನು (ವರದಿಗಾರ ಹೇಳುವಂತೆ ರೂ. 9.90 ಕೋಟಿ) ಮಳೆಯಿಲ್ಲದೆ, ಬೆಳೆಯಿಲ್ಲದೆ ಕಂಗೆಟ್ಟು ಹೋಗಿರುವ ರೈತರಿಗೆ ನೀಡಿದ್ದರೆ ಯಾರೂ ಪ್ರಶ್ನಿಸುತ್ತಿರಲಿಲ್ಲ