ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಷಯ ಹೇಳುತ್ತ ಮಾತು ಆರಂಭಿಸಿದ ವಿಜಯೇಂದ್ರ ಪೊಲೀಸರು ಯಾರೋ ಒಬ್ಬ ಅಮಾಯಕನನ್ನು ಬಂಧಿಸಿ ಕಣ್ಣೊರೆಸುವ ಕೆಲಸ ಮಾಡಿದ್ದಾರೆ, ಆದರೆ ಇದರ ಹಿಂದೆ ದೊಡ್ಡ ಕುತಂತ್ರ ಅಡಗಿದೆ, ಈ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಖಂಡಿತ ಒಳ್ಳೆಯದನ್ನು ಮಾಡಲ್ಲ ಎಂದ ವಿಜಯೇಂದ್ರ ಹೇಳಿದರು.