ಪ್ರಸ್ತುತವಾಗಿ ವರ್ಗಾವಣೆ ದಂಧೆ ನಡೆಯುತ್ತಿದೆ, ಇದರಲ್ಲಿ ಸಣ್ಣ ಪುಟ್ಟ ವ್ಯವಹಾರಗಳು ನಡೆಯುತ್ತಿರಬಹುದು ಎಂದು ಶಿವರಾಂ ಹೇಳಿದರು. ಹೆಚ್ ಡಿ ದೇವೇಗೌಡ ಕುಟುಂಬ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ನಮ್ಮ ಪಕ್ಷವನ್ನು ಸಂಘಟಿಸಲು ನಾಯಕರು ಮುಂದಾಗಬೇಕೆನ್ನುವ ಕಾರಣಕ್ಕೆ ಈ ಮಾತುಗಳನ್ನು ಹೇಳುತ್ತಿರುವುದಾಗಿ ಶಿವರಾಂ ಹೇಳಿದರು.