‘ನಾವು ಕೂಡ ಹಸು ಸಾಕ್ತೀವಿ’; ಮುಂದಿನ ಯೋಜನೆ ರಿವೀಲ್ ಮಾಡಿದ ಶಿವಣ್ಣ

ಡಾ. ರಾಜ್ಕುಮಾರ್ ಅವರು ನಂದಿನಿ ಪ್ರಾಡಕ್ಟ್ಗಳಿಗೆ ಪ್ರಚಾರ ರಾಯಭಾರಿ ಆಗಿದ್ದರು. ರೈತರಿಕೆ ಸಹಕಾರಿ ಆಗುತ್ತದೆ ಎನ್ನುವ ಕಾರಣಕ್ಕೆ ಅವರು ಯಾವುದೇ ಸಂಭಾವನೆ ಪಡೆದಿರಲಿಲ್ಲ. ಪುನೀತ್ ರಾಜ್ಕುಮಾರ್ ಕೂಡ ಹಾಗೆಯೇ ಮಾಡಿದ್ದರು. ಅವರು ಕೂಡ ನಂದಿನಿ ಪ್ರಾಡಕ್ಟ್ ಜಾಹೀರಾತಿಗೆ ಹಣ ಪಡೆದಿಲ್ಲ. ಈಗ ಶಿವಣ್ಣ ಅವರು ಉಚಿತವಾಗಿ ಈ ಬ್ರ್ಯಾಂಡ್ನ ಪ್ರಚಾರ ಮಾಡುತ್ತಿದ್ದಾರೆ. ರಾಜ್ಕುಮಾರ್ ಅವರು ರಾಯಭಾರಿ ಆದ ಸಂದರ್ಭದಲ್ಲಿ ನಂದಿನಿ ಸಂಸ್ಥೆಯವರು ಹಸುವನ್ನು ಅಣ್ಣಾವ್ರಿಗೆ ಉಡುಗೊರೆಯಾಗಿ ನೀಡಿದ್ದರು. ಈಗ ಶಿವಣ್ಣ ಕೂಡ ಹಸು ಸಾಕುವ ಪ್ಲ್ಯಾನ್ನಲ್ಲಿದ್ದಾರೆ. ‘ಕನಕಪುರದಲ್ಲಿ ಫಾರ್ಮ್ಹೌಸ್ ಖರೀದಿಸಿದ್ದೇನೆ. ಅಲ್ಲಿ ಹಸು ಸಾಕುವ ಆಲೋಚನೆ ಇದೆ’ ಎಂದು ಅವರು ಹೇಳಿದ್ದಾರೆ.