ಒಂದೇ ಅಪರಾಧವನ್ನು ಪಾಟೀಲ್ ಪದೇಪದೆ ಮಾಡುತ್ತಾನೆಂದರೆ ಅವನಿಗೆ ಕಾನೂನು ಮತ್ತು ಪೊಲೀಸರ ಭಯವಿಲ್ಲ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮ ಅಧಿಕಾರಿ ಮತ್ತು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಏನೇ ಹೇಳಿದರೂ ವೈಫಲ್ಯ ಎದ್ದುಕಾಣುತ್ತಿದೆ. ಕೆಇಎ ಪರೀಕ್ಷೆ ನಡೆಯುವಾಗ ಪಾಟೀಲ್ ನನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದರೆ, ಇದೆಲ್ಲ ಸಂಭವಿಸುತ್ತಿರಲಿಲ್ಲ.