ದಶಕಗಳಿಂದ ಕ್ಷೇತ್ರವನ್ನು ಒಬ್ಬ ಶಾಸಕನಾಗಿ ಪ್ರತಿನಿಧಿಸುತ್ತಿರುವ ಬೊಮ್ಮಾಯಿಗೆ ಜನರ ನಾಡಿಮಿಡಿತ ಚೆನ್ನಾಗಿ ಗೊತ್ತು. ಅವರು ಜನರಿಗೆ ಅಪೀಲ್ ಮಾಡಿದ್ದು ಅದನ್ನೇ. ಸಂಸದನಾಗಿ ಅಯ್ಕೆಯಾದರೂ ನಿಮ್ಮನ್ನು ಬಿಟ್ಟು ದೂರ ಹೋಗಲ್ಲ, ಕೊನೆ ಉಸರಿರುವವರೆಗೆ ನಿಮ್ಮೊಂದಿಗೆ ಇರುತ್ತೇನೆ, ನಿಮ್ಮ ಸೇವೆ ಮಾಡುತ್ತೇನೆ ಅಂತ ಗದ್ಗದಿತರಾಗಿ ಹೇಳಿದರು.