ಎಲ್ಲ ಅಧಿಕಾರಿಗಳು ದುರಹಂಕಾರಿಗಳು, ಭ್ರಷ್ಟರು ಅಂತ ಹೇಳಲು ತನಗೆ ಹುಚ್ಚುನಾಯಿಯೇನೂ ಕಚ್ಚಿಲ್ಲ, ಆದರೆ ಕೆಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿರುವುದು ಮನಸ್ಸಿಗೆ ನೋವಾಗುತ್ತದೆ, ಸರ್ಕಾರಕ್ಕೆ ಯಾವ ಇಲಾಖೆಯ ಮೇಲೂ ನಿಯಂತ್ರಣ ಇಲ್ಲ ಎಂದು ಹೇಳುವ ರಾಜು ಕಾಗೆ, ತಮ್ಮ ಶಾಲೆಯಲ್ಲಿ ಎಲ್ಲ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿದರೂ ಅನುಮತಿಗಾಗಿ 2-3 ವರ್ಷಗಳಿಂದ ಕಾಯುತ್ತಿದ್ದೇವೆ ಎನ್ನುತ್ತಾರೆ.