ದಾವಣಗೆರೆ, ಆಗಸ್ಟ್ 2: ದಾವಣಗೆರೆ ಆರ್ಟಿಒ (Davangere RTO) ಕಚೇರಿ ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಆರ್ಟಿಒ ಕಚೇರಿಯ ನಾಲ್ವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಆರ್ಟಿಒ ಕಚೇರಿಯ ಸಿಬ್ಬಂದಿ ಪ್ರದೀಪ್, ಜಗದೀಶ್, ಶಶಿಕುಮಾರ್ ಮತ್ತು ವಸಂತಕುಮಾರ್ ಬಂಧಿತ ಆರೋಪಿಗಳು. ನಕಲಿ ದಾಖಲೆ (documents) ಸೃಷ್ಟಿಸಿ, ಕದ್ದ ಬೈಕ್ಗಳನ್ನು (Bike Theft) ಬೇರೆಯರ ಹೆಸರಿಗೆ ನೋಂದಣಿ ಮಾಡಿದ್ದ ಆರೋಪ ಈ ನಾಲ್ವರು ಸಿಬ್ಬಂದಿ ವಿರುದ್ಧ ಕೇಳಿಬಂದಿದೆ.