ರಸ್ತೆ ಬದಿಯ ಜಾಗ ಮತ್ತು ಮರಗಳು ಖಾಸಗಿಯವರಿಗೆ ಸೇರಿರುವುದರಿಂದ ಚತುಷ್ಪಥ ರಸ್ತೆಯ ಕಾಮಗಾರಿಯಲ್ಲಿ ತೊಡಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮರಗಳನ್ನ ತೆರವುಗೊಳಿಸಲಾಗದು. ಹೀಗಾಗಿ, ಪ್ರಾಧಿಕಾರದ ಅಧಿಕಾರಿಗಳು ಖಾಸಗಿಯವರೊಂದಿಗೆ ಮಾತಾಡಲೇಬೇಕಿದೆ. ಅವರು ಈ ಕೆಲಸವನ್ನು ಬೇಗ ಮಾಡಿದಷ್ಟು ಒಳ್ಳೆಯದು. ಯಾಕೆಂದರೆ ಕೆಲ ಮರಗಳು ಯಾವುದೇ ಕ್ಷಣ ಉರುಳಬಹುದಾದ ಸ್ಥಿತಿಯಲ್ಲಿವೆ.