ಚಿಕ್ಕಪುಟ್ಟ ನಾಯಕರು ಸಹ ತನ್ನ ವಿರುದ್ಧ ಮಾತಾಡುತ್ತಿರುವುದರಿಂದ ಸಿಡಿಮಿಡಿಗೊಳ್ಳುತ್ತಿರುವ ಶಿವಶಂಕರಪ್ಪನವರಿಗೆ ಮಾಧ್ಯಮ ಪ್ರತಿನಿಧಿಗಳು ಅದೇ ವಿಷಯದ ಬಗ್ಗೆ ಮಾತಾಡಿದಾಗ ಪುನಃ ಸಿಡುಕಿದ ಅವರು, ಅದನ್ನು ಸಿದ್ದರಾಮಯ್ಯ ಜೊತೆ ಮಾತಾಡಿ ಬಗೆಹರಿಸಿಕೊಳ್ಳುವುದಾಗಿ ಹೇಳಿದರು. ಲಿಂಗಾಯತ ಅಧಿಕಾರಿಗಳು ಬೇಕೆನ್ನುವ ವಾದಕ್ಕೆ ಅವರು ಜೋತುಬಿದ್ದಿರೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.