ಎಐಸಿಸಿ ಹೈಕಮಾಂಡ್ ಮೀಟಿಂಗ್ ಹಿನ್ನೆಲೆ ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ

ದೆಹಲಿಯಲ್ಲಿಂದು ಕಾಂಗ್ರೆಸ್​ ಹೈಕಮಾಂಡ್​ ಸಭೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಹೈಕಮಾಂಡ್​​ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್​​​​, ಸಚಿವರಾದ ಕೆ.ಹೆಚ್​ .ಮುನಿಯಪ್ಪ, ಆರ್​​​.ಬಿ.ತಿಮ್ಮಾಪುರ, ಚಲುವರಾಯಸ್ವಾಮಿ, ಎಂಎಲ್​ಸಿ ಬಿ.ಕೆ. ಹರಿಪ್ರಸಾದ್​​​​​​ ಈಗಾಗಲೇ ದೆಹಲಿಯಲ್ಲಿದ್ದಾರೆ. ದೆಹಲಿಯಲ್ಲಿಂದು ರಾಜ್ಯ ಕಾಂಗ್ರೆಸ್ ಜತೆ​ ಹೈಕಮಾಂಡ್​​ ಸಭೆ ಏರ್ಪಾಟಾಗಿದೆ.