ಬೇರೆ ಸಮಯದಲ್ಲಾಗಿದ್ರೆ ಅವರು, ಗದರಿಬಿಡುತ್ತಿದ್ದರು. ಏಯ್ ಕೂತ್ಕೊಳ್ರಯ್ಯ ಅಂತ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದರು. ಅದರೆ ಇದು ಚುನಾವಣೆ ಸಮಯ, ಗದರುವಂತಿಲ್ಲ! ತನ್ನ ಕ್ಷೇತ್ರದಲ್ಲೇ ಹೀಗಾದರೆ ಬಹಳ ತಪ್ಪು ಸಂದೇಶ ರವಾನೆಯಾಗುತ್ತದೆ, ಸಭೆ ಮುಗಿಯುವರೆಗೆ ಯಾರೂ ಎದ್ದು ಹೋಗಬೇಡಿ, ಎಲ್ಲರ ಭಾಷಣ ಕೇಳಬೇಕು ಅಂತ ಅವರು ಹೇಳುತ್ತಾರೆ.