ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ

ಮೃತ ದೀಪು ಆರ್ಥಿಕವಾಗಿ ತೀರಾ ಬಡವನಾಗಿದ್ದ. ಕೆಲವು ಸಮಯದ ಹಿಂದೆ ಅವರು ವಾಸವಿದ್ದ ಮನೆಗಳು ನಾರಾಯಣಿ ನದಿಯಲ್ಲಿ ಕೊಚ್ಚಿ ಹೋಗಿ ಸ್ಥಳಾಂತರಗೊಂಡಿದ್ದರು. ಎಲ್ಲೋ ದೂರದ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದ. ಹೀಗಾಗಿ ಎರಡು ತಿಂಗಳ ಹಿಂದೆ ಮಹಾರಾಷ್ಟ್ರದ ಪುಣೆಗೆ ಕುಟುಂಬವನ್ನು ಸಾಕಲು ಹೋಗಿದ್ದ. ಈಗ ಆತ ಬರ್ಬರವಾಗಿ ಕೊಲೆಯಾಗಿದ್ದಾನೆ.