ಕುಮಾರಸ್ವಾಮಿಗೆ ಮಾನ ಮರ್ಯಾದೆ ಏನಾದರೂ ಇದ್ದರೆ ಆದಾಯ ತೆರಿಗೆ ನಿನ್ನೆ ಹೊರಡಿಸಿರುವ ಪತ್ರಿಕಾ ಹೇಳಿಕೆ ನೋಡಲಿ ಎಂದು ಹೇಳಿದ ಲಕ್ಷ್ಮಣ್ ಪ್ರೆಸ್ ನೋಟ್ ಪ್ರದರ್ಶಿಸಿದರು. ತನ್ನ ಹೇಳಿಕೆಯಲ್ಲಿ ಇಲಾಖೆಯು ಬರಾಮತ್ತಾದ ಹಣ ಕಾಂಗ್ರೆಸ್ ನಾಯಕರಿಗೆ ಸೇರಿದ್ದು ಅಂತ ಹೇಳಿಲ್ಲ, ಸರ್ಕಾರಕ್ಕೆ ತೆರಿಗೆ ವಂಚಿಸಲು ಗುತ್ತಿಗೆದಾರ ಮನೆಯಲ್ಲಿ ಹಣ ಇಟ್ಟುಕೊಂಡಿದ್ದ ಎಂದು ಹೇಳಿದೆ ಎಂದು ಲಕ್ಷ್ಮಣ್ ಹೇಳಿದರು.