ಬೆಂಗಳೂರು ಮಲ್ಲೇಶ್ವರಂನಿಂದ ಸರೋಜಾದೇವಿಯವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಆಗಮಿಸಿದ ಬಳಿಕ ಅದನ್ನು ಹೂವಿನ ಪಲ್ಲಕ್ಕಿಯಲ್ಲಿ ತೋಟಕ್ಕೆ ಸಾಗಿಸುವ ಮೊದಲು ಗ್ರಾಮಸ್ಥರ ಅಂತಿಮ ದರ್ಶನಕ್ಕಾಗಿ ಸ್ವಲ್ಪ ಹೊತ್ತು ಮನೆಮುಂದೆ ಇಡಲಾಗುತ್ತದೆ ಎಂದು ಕೃಷ್ಣಪ್ಪ ಹೇಳುತ್ತಾರೆ. ಸಂಪ್ರದಾಯದಂತೆ ಡೊಳ್ಳು, ತಮ್ಮಟೆ ಬಾರಿಸುತ್ತ ದೇಹವನ್ನು ತೋಟಕ್ಕೆ ತಂದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಅವರು ಹೇಳುತ್ತಾರೆ.