ದೆಹಲಿಯಲ್ಲಿ ಬಿಕೆ ಹರಿಪ್ರಸಾದ್

ಕರ್ನಾಟಕದಲ್ಲೂ ಜಾತಿಗಣನೆ ಆಗಿದೆ, ಅದನ್ನು ನಡೆಸಿದ ಕಾಂತರಾಜ್ ಆಯೋಗವು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಹರಿಪ್ರಸಾದ್ ಹೇಳಿದರು. ಕರ್ನಾಟಕ ಸರ್ಕಾರ ಕಾಂತರಾಜ್ ವರದಿಯನ್ನು ವಿಧಾನ ಸಭೆಯ ಎರಡೂ ಮನೆಗಳಲ್ಲಿ ಚರ್ಚೆಗೆ ತರಬೇಕಿದೆ, ಅದರಲ್ಲಿರುವ ತಪ್ಪು ಒಪ್ಪುಗಳನ್ನು ಸರಿಪಡಿಸಬೇಕಿದೆ ಮತ್ತು ವಿಧಾನ ಸಭೆ ಮತ್ತು ಪರಿಷತ್ ಅದನ್ನು ಪಾಸು ಮಾಡಿಸಿ ಅನುಷ್ಠಾನಕ್ಕೆ ತರಬೇಕಿದೆ ಎಂದು ಹೇಳಿದರು.