ವಿನಯ್ ತನ್ನ ಮರಣ ಪತ್ರದಲ್ಲಿ ನಾಲ್ವರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ, ವಿರಾಜಪೇಟೆ ಶಾಸಕ ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ, ಹರೀಶ್ ಬೋಯ ಮತ್ತು ತನ್ನೆರಾ ಮಹೀನ್. ಆದರೆ ಮೊದಲ ಮೂರು ಹೆಸರುಗಳು ನಾಪತ್ತೆಯಾಗಿವೆ. ದೂರಿನಲ್ಲಿ ನಾವು ಹೊಸದಾಗಿ ಯಾರ ಹೆಸರನ್ನೂ ಸೇರಿಸಿಲ್ಲ, ಡೆತ್ ನೋಟ್ನಲ್ಲಿ ಉಲ್ಲೇಖವಾಗಿರುವ ಹೆಸರುಗಳನ್ನು ಮಾತ್ರ ದಾಖಲಿಸಿದ್ದೇವೆ ಎಂದು ವಿನಯ್ ಸಹೋದರ ಹೇಳುತ್ತಾರೆ.