ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್​​ಗಳನ್ನು ಬೀಳಿಸಿ ಕಿಡಿಗೇಡಿಯ ಪುಂಡಾಟ

ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದೆ. ಸೋಮವಾರ (ಜ.08) ರಾತ್ರಿ 8 ಗಂಟೆ ಸುಮಾರಿಗೆ ಕಿಡಿಗೇಡಿ ಕುಡಿದ ಮತ್ತಿನಲ್ಲಿ ಪ್ರಕಾಶ್​​​ ನಗರದ ಕುವೆಂಪು ಮೆಟ್ರೋ ನಿಲ್ದಾಣ ಬಳಿಯ ಮನೆ ಮುಂದೆ ಮತ್ತು ಲೇಡಿಸ್​ ಪಿಜಿ ಎದುರು ನಿಲ್ಲಿಸಿದ್ದ ಬೈಕ್ ಮತ್ತು ಸ್ಕೂಟಿಯನ್ನು ಬೀಳಿಸಿ ಅಟ್ಟಹಾಸ ಮೆರೆದಿದ್ದಾರೆ.