ಆರ್ ಅಶೋಕ, ಹೆಚ್ ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಅವರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಬೆಳಗಾವಿ ವಿಧಾನಸಭಾ ಅಧಿವೇಶನ ರೋಚಕವಾಗಲಿರುವ ಬಗ್ಗೆ ಅನುಮಾನ ಬೇಡ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಮ್ಮಲ್ಲಿ ಅನೇಕ ಅಸ್ತ್ರಗಳಿವೆ ಅಂತ ಅಶೋಕ ಹೇಳುತ್ತಿದ್ದಾರೆ. ಎಲ್ಲ ಅಸ್ತ್ರಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ ಅಂತ ಶಿವಕುಮಾರ್ ಹೇಳುತ್ತಾರೆ.