ಬಿಜೆಪಿ ನಿಯೋಗವೊಂದು ಇಂದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಕೆಲ ನಾಯಕರು ಸರ್ಕಾರದ ಬೇಜವಾಬ್ದಾರಿತನವನ್ನು ಖಂಡಿಸಿದರು. ಜಲಾಶಯದ ಸಾಮರ್ಥ್ಯ 130 ಟಿಎಂಸಿ ಇದ್ದರೂ ಹೂಳನ್ನು ಎತ್ತದ ಕಾರಣ ಸಾಮರ್ಥ್ಯ 100 ಟಿಎಂಸಿ ಆಗಿದೆ. ಗೇಟನ್ನು ದುರಸ್ತಿ ಮಾಡದೆಹೋದರೆ, ಜಲಾಶಯದಲ್ಲಿ 80 ಟಿಎಂಸಿಯಷ್ಟು ನೀರು ಸಂಗ್ರಹಗೊಂಡರೂ ಉಳಿದ ಕ್ರಸ್ಟ್ ಗೇಟುಗಳಿಗೆ ಅಪಾಯವಿದೆ ಎಂದು ತಜ್ಞರು ಹೇಳಿದ್ದಾರೆ.