ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು ಮಾಧ್ಯಮಗಳೊಂದಿಗೆ ಮಾತಾಡುತ್ತಿರುವ ರೀತಿಯ ಬಗ್ಗೆ ಚಲುವರಾಯಸ್ವಾಮಿ ಖೇದ ವ್ಯಕ್ತಪಡಿಸಿದರು. ಹಿರಿಯರು ಮತ್ತು ಹಿಂದೆ ಡಿಸಿಎಂ ಕೂಡ ಆಗಿದ್ದ ಅಶೋಕ ತಾನು ವಿರೋಧ ಪಕ್ಷದ ನಾಯಕ ಅನ್ನೋ ಕಾರಣಕ್ಕೆ ಮಾತಾಡುತ್ತಿರುವಂತಿದೆ, ಅವರು ತನ್ನ ಸ್ನೇಹಿತರು ನಿಜ ಅದರೆ ಅವರ ಮಾತಿನ ವೈಖರಿ ಮನಸ್ಸಿಗೆ ನೋವನ್ನುಂಟು ಮಾಡುತ್ತಿದೆ ಎಂದು ಸಚಿವ ಹೇಳಿದರು.