ದಾವಣಗೆರೆ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಕಾಡುತ್ತಿದೆ ಜೀವ ಭಯ!

ಅದು ಮೂರ್ನಾಲ್ಕು ಜಿಲ್ಲೆಗಳಿಗ ಬಡ ರೋಗಿಗಳ ಜೀವನಾಡಿಯಾಗಿರುವ ಜಿಲ್ಲಾಸ್ಪತ್ರೆ, ಪ್ರತಿನಿತ್ಯ ಇಲ್ಲಿ ಸಾವಿರಾರು ಜನ ರೋಗಿಗಳು ಚಿಕಿತ್ಸೆಗೆಂದು (Treatment) ಬರುತ್ತಾರೆ. ಆದರೆ ಇಲ್ಲಿಗೆ ಬಂದ ರೋಗಿಗಳು (Patients) ಗುಣಮುಖರಾಗಿ ಹೋಗುವವರೆಗೂ ಜೀವಭಯದಲ್ಲೇ ಚಿಕಿತ್ಸೆ ಪಡೆಯ ಬೇಕಾದ ದುಃಸ್ಥಿತಿ ಬಂದಿದೆ. ಆಸ್ಪತ್ರೆಯಿಂದ‌ ಚಿಕಿತ್ಸೆ ಪಡೆದು ಜೀವಂತವಾಗಿ ಹೋದ್ರೆ ಸಾಕು ಎನ್ನುವ ಮಟ್ಟಿಗೆ ‌ರೋಗಿಗಳು ಹೆದರುವ ಪರಿಸ್ಥಿತಿ ಗೆ ಬಂದಿದೆ. ಹಾಗಾದ್ರೆ ಅದು ಏಕೆ ಅಂತೀರಾ ಈ ಸ್ಟೋರಿ ನೋಡಿ‌.. ರೋಗಿಗಳ ಮೇಲೆ ಕುಸಿದು ಬಿದ್ದಿರುವ ಮೇಲ್ಛಾವಣಿ, ಎಲ್ಲೆಂದರಲ್ಲಿ ಬಿರುಕು ಬಿಟ್ಟಿರುವ ಆಸ್ಪತ್ರೆಯ ಗೋಡೆಗಳು, ಆಸ್ಪತ್ರೆಯ ಕಟ್ಟಡದ ಗೋಡೆಗಳಲ್ಲಿ ಬೆಳೆದಿರುವ ಗಿಡಗಂಟಿಗಳು, ಅಸ್ಥಿಪಂಜರದ ರೀತಿ ಕಾಣುತ್ತಿರುವ ಕಟ್ಟಡ ಈ ದೃಶ್ಯಗಳೆಲ್ಲಾ ಕಂಡು ಬರುವುದು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ (Davangere District Hospital).