ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನವನ್ನು ಎರಡು ದಿನಗಳಷ್ಟು ಮೊದಲು ಮುಕ್ತಾಯಗೊಳಿಸಲಾಗಿತ್ತು. ಅವಧಿಗೆ ಮೊದಲು ಕೊನೆಗೊಳಿಸುವುದು, ಸಚಿವರು, ಸದಸ್ಯರು ಗೈರಾಗುವುದೇ ಅಧಿವೇಶನದ ಹೈಲೈಟ್ ಆದರೆ ಯಾವ ಪುರುಷಾರ್ಥಕ್ಕೆ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸಲಾಗುತ್ತಿದೆ? ಉತ್ತರ ಕರ್ನಾಟಕ ಜನರಿಗೆ ಮಂಕುಬೂದಿ ಎರಚುವುದನ್ನು ಸಂಬಂಧಪಟ್ಟವರು ನಿಲ್ಲಿಸದೆ ಹೋದರೆ ಈ ಭಾಗದ ಕನ್ನಡಿಗರು ರೊಚ್ಚಿಗೆದ್ದಾರು.