ಆರ್ ಆರ್ ನಗರದಲ್ಲಿ ಡಿಕೆ ಶಿವಕುಮಾರ್

ಒತ್ತುವರಿ ಪೀಡೆ ಬೆಂಗಳೂರು ನಗರಕ್ಕೆ ಹೊಸದೇನೂ ಅಲ್ಲ, ದೇವಸ್ಥಾನ, ಆಶ್ರಮ, ಪಾರ್ಕ್ ಮತ್ತು ಇತರ ಸಾರ್ವಜನಿಕ ಉಪಯೋಗಕ್ಕೆ ಬರುವ ಸ್ಥಳಗಳನ್ನು ಅವ್ಯಾಹತವಾಗಿ ಒತ್ತುವರಿ ಮಾಡಿಕೊಳ್ಳುವ ಕಾನೂನುಬಾಹಿರ ಕೆಲಸ ಜಾರಿಯಲ್ಲಿದೆ. ಜನ ರಾಜಾಕಾಲುವೆಗಳನ್ನೂ ಬಿಡುತ್ತಿಲ್ಲ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಒತ್ತುವರಿಗಳನ್ನು ತೆರವು ಮಾಡಿಸುವ ಕಾರ್ಯಕ್ಕೆ ಮುಂದಾಗಬೇಕು.