ನೀವೇ ಗೆಲ್ಲೋದು ಅಂತ ಅಷ್ಟು ನಿಖರವಾಗಿ ಹೇಗೆ ಹೇಳುತ್ತೀರಿ ಅಂದಾಗ ಸಿಡಿಮಿಡಿಗೊಂಡ ಸುರೇಶ್, ಹೇಗೆ ಗೆಲ್ತೀರಿ ಅಂದರೆ ಏನರ್ಥ? ನೀವು ಕ್ಷೇತ್ರದಲ್ಲಿ ಸುತ್ತಾಡದೆ, ವಸ್ತುಸ್ಥಿತಿಯನ್ನು ಅರಿಯದೆ ಈ ಪ್ರಶ್ನೆಯನ್ನು ಕೇಳುತ್ತಿದ್ದೀರಿ, ಕಳೆದ ಹತ್ತ ವರ್ಷಗಳಿಂದ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿರುವ ನನಗೆ ಹಕೀಕತ್ತು ಗೊತ್ತು, ಜನರ ನಾಡ ಮಿಡಿತ ಗೊತ್ತು ಮತ್ತು ಅವರು ಏನು ಬಯಸುತ್ತಾರೆ ಅಂತ ಗೊತ್ತು ಎಂದು ಡಿಕೆ ಸುರೇಶ್ ಹೇಳಿದರು.