ನಾವಗೆ ಗ್ರಾಮದ ಆತಂಕಿತ ಮಹಿಳೆ

ಸದ್ಯಕ್ಕೆ ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿರುವುದರಿಂದ ಶಾಂತಿ ನೆಲೆಸಿದೆ. ಆದರೆ ಅದು ತಾತ್ಕಾಲಿಕ. ಯಾಕೆಂದರೆ ಪುಂಡಾಟ ನಡೆಸಿದ್ದು ಯಾರೆಂದು ನಾವಗೆ ಗ್ರಾಮದ ಯುವಕರಿಗೆ ಗೊತ್ತಿದೆ ಮತ್ತು ಪ್ರತೀಕಾರದ ಜ್ವಾಲೆ ಅವರಲ್ಲಿ ಹೊತ್ತಿರಲೂಬಹುದು. ಈ ಹಿನ್ನೆಲೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆ ಮುಖ್ಯ ಮತ್ತು ಮಹತ್ವದೆನಿಸುತ್ತದೆ. ಸತೀಶ್ ಜಾರಕಿಹೊಳಿ ಎರಡೂ ಗುಂಪಗಳನ್ನು ಕೂರಿಸಿಕೊಂಡು ಮಾತಾಡಲೇಬೇಕು.