ಸಿದ್ಧಲಿಂಗ ಸ್ವಾಮೀಜಿಯವರ ಜೊತೆ ಪರಮೇಶ್ವರ್

ತುಮಕೂರು ಜಿಲ್ಲೆಯ ಹಲವು ಭಾಗಗಳಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯ ಕೆಲಸ ನಡೆಯುತ್ತಿದೆ, ಕೊರಟಗೆರೆ ಕ್ಷೇತ್ರದಲ್ಲಿ 69 ಕೆರೆಗಳಿಗೆ ನೀರು ತುಂಬಿಸಲು ಅನುಮೋದನೆ ಸಿಕ್ಕಿದೆ, ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ ಎಂದು ಪರಮೇಶ್ವರ್ ಶ್ರೀಗಳಿಗೆ ಹೇಳಿದರು. ಜೋನಲ್ ಬ್ಯಾಲೆನ್ಸಿಂಗ್ ರಿಜರ್ವಾಯರ್ ಮೂಲಕ ಪಾವಗಢ ತಾಲ್ಲೂಕಿನ ನೀರಿನ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶ್ರೀಗಳ ಗಮನಕ್ಕೆ ತಂದರು.