ಕಾಂಗ್ರೆಸ್​​​ ಸರ್ಕಾರಕ್ಕೆ ಮಾರ್ಚ್​​​ 22ರ ಡೆಡ್​​ಲೈನ್​​

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟವು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಅಂತಿಮ ಗಡುವು ನೀಡಿದೆ. ಮಾರ್ಚ್ 22ರೊಳಗೆ ಬೇಡಿಕೆ ಈಡೇರದಿದ್ದರೆ ಮಾರ್ಚ್ 25ರಿಂದ ಬಸ್ ಸಂಚಾರ ಬಂದ್ ಮಾಡುವುದಾಗಿ ಎಚ್ಚರಿಸಿದೆ. ಮುಖ್ಯ ಬೇಡಿಕೆಗಳಲ್ಲಿ 7ನೇ ವೇತನ ಆಯೋಗದ ಅನುಷ್ಠಾನ, ಹಿಂಬಾಕಿ ವೇತನ ಪಾವತಿ, ಮತ್ತು ವಜಾ ಮಾಡಿದ ನೌಕರರ ಪುನರ್ ನೇಮಕ ಸೇರಿವೆ.