ಅಸಲಿಗೆ, ಕುಮಾರಸ್ವಾಮಿ ಹಿಂದೆ ತಮ್ಮ ಪಕ್ಷದವರಾಗಿದ್ದ ಶಿವಲಿಂಗೇಗೌಡರನ್ನು ಟೀಕಿಸುವ ಭರದಲ್ಲಿ ರೇವಣ್ಣರನ್ನೂ ಸೇರಿಸಿಬಿಡುತ್ತಾರೆ, ಅದು ಅವರಿಂದಾದ ಅಚಾತುರ್ಯ. ಆದರೆ, ಯಾರದ್ದು ಅಸಲಿ ಹೋರಾಟ ಯಾರದ್ದು ಕೃತ್ರಿಮ ಅಂತ ಕುಮಾರಸ್ವಾಮಿ ಹೇಗೆ ನಿರ್ಧರಿಸುತ್ತಾರೆ? ಸದನದಲ್ಲಿ ಅವರು ನ್ಯಾಯಾಧೀಶರೇ? ಅವರಿಬ್ಬರು ರೈತರ ಪರವಾಗಿ ಹೋರಾಡುತ್ತಿದ್ದಾರೆ, ಅವರ ಬೆಂಬಲಕ್ಕೆ ನಿಲ್ಲುವ ಬದಲು ಹೀಗೆ ಟೀಕಿಸಿದರೆ ಅದು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಗೆ ಶೋಭೆ ನೀಡದು.