ಈಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಮಾಧ್ಯಮಳೊಂದಿಗೆ ಮಾತಾಡುವಾಗ ಆಥವಾ ಹೇಳಿಕೆಗಳನ್ನು ನೀಡುವಾಗ ಭಾಷೆಯ ಮರ್ಯಾದೆಯನ್ನು ಕಡೆಗಾಣಿಸುತ್ತಿರುವುದು ಕನ್ನಡಿಗರ ಗಮನಕ್ಕೆ ಬರುತ್ತಿದೆ. ಇವತ್ತು ಸವಳಂಗಾದಲ್ಲಿ ಅವರು ಸರ್ಕಾರದ ಸೊಕ್ಕು ಮುರಿಯುತ್ತೇವೆ ಅಂತ ಹೇಳಿದರು. ಅದರಲ್ಲ್ಲಿ ತಪ್ಪೇನು ಇಲ್ಲ ಮತ್ತು ಪದ ಅಸಂಸದೀಯವೂ ಅಲ್ಲ. ಆದರೆ ಅಂಥ ಪದ ಬಳಸದೆಯೂ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಬಿಎಸ್ ಯಡಿಯೂರಪ್ಪ ಎಷ್ಟೇ ಆವೇಶದಲ್ಲಿದ್ದರೂ ಸಭ್ಯ ಪದಗಳನ್ನು ಬಳಸುತ್ತಿದ್ದರು.