ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತಮ್ಮ ಮಗನಿಗೆ ಹುಮ್ನಾಬಾದ್ ಕ್ಷೇತ್ರದಿಂದ ಸ್ಪರ್ಧಿಸಲು ಬಿ ಫಾರ್ಮ್ ನೀಡಿದ್ದು ಅವರ ಪುತ್ರ ವ್ಯಾಮೋಹವಲ್ಲವೇ? 1996 ರಲ್ಲಿ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಇಬ್ರಾಹಿಂಗೆ ಮೂರು ಜವಾಬ್ದಾರಿಗಳನ್ನು ನೀಡಿದ್ದರು. ಅವರು ಅಧಿಕಾರದಿಂದ ಕೆಳಗಿಳಿಯುತ್ತಲೇ ತಾವು ಆಧಿಕಾರ ಗಿಟ್ಟಿಸಲು ಬೇರೆ ಪಕ್ಷಕ್ಕೆ ಹೋದರು. ಅಲ್ಲಿ ಅಧಿಕಾರ ತಪ್ಪಿದಾಗ ಪುನಃ ಜೆಡಿಎಸ್ ಗೆ ಬಂದರು ಅಂತ ಸರವಣ ಹೇಳಿದರು.