ತೆಲುಗು ಬಿಡ್ಡ ಚಂದ್ರಬಾಬು ಕುಟುಂಬದಲ್ಲಿ ಸಂಭ್ರಮ; ಎನ್​ಟಿಆರ್​​​ ಪ್ರತಿಮೆಗೆ ಪುಷ್ಟನಮನ ಸಲ್ಲಿಸಿದ ನಾಯ್ಡು

ತೆಲುಗು ಬಿಡ್ಡ ಚಂದ್ರಬಾಬು ಕುಟುಂಬದಲ್ಲಿ ಸಂಭ್ರಮ; ಎನ್​ಟಿಆರ್​​​ ಪ್ರತಿಮೆಗೆ ಪುಷ್ಟನಮನ ಸಲ್ಲಿಸಿದ ನಾಯ್ಡು ಮೈತ್ರಿಕೂಟದ ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆ ತೆಲುಗು ಬಾಂಧವರು ಸಂಭ್ರಮಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇನ್ನು ಮಾವ ಮಾಜಿ ಮುಖ್ಯಮಂತ್ರಿ, ಹಿರಿಯ ನಟ ನಂದಮೂರಿ ತಾರಕರಾಮರಾವ್​​ ಅವರ ಪ್ರತಿಮೆಗೆ ಪುಷ್ಟನಮನ ಸಲ್ಲಿಸಿದರು. ಒಟ್ಟು 175 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತಾರೂಢ ವೈಸಿಪಿ 13 ಸ್ಥಾನಗಳನ್ನು ಮಾತ್ರ ಗಳಿಸಿದ್ದು, ಮೈತ್ರಿಕೂಟ 162 ಸ್ಥಾನಗಳನ್ನು ಗೆದ್ದಿದೆ.